ವನಸುಮ ವೇದಿಕೆಯ ಸಾರಥ್ಯ ವಿನಯ್ ಆಚಾರ್ಯ ಮುಂಡ್ಕೂರು ಬಗಲಿಗೆ

ಕಾಪು : ವನಸುಮ ವೇದಿಕೆ (ರಿ.) ಕಟಪಾಡಿ ಇದರ ವಾರ್ಷಿಕ ಮಹಾಸಭೆ ಜು. ೪, ಶುಕ್ರವಾರದಂದು ಕಟಪಾಡಿಯ ವನಸುಮ ವೇದಿಕೆಯ ಕಛೇರಿಯಲ್ಲಿ ನಡೆಯಿತು.
ಬಾಸುಮ ಕೊಡಗು ಅಧ್ಯಕ್ಷತೆಯಲ್ಲಿ ನಡೆದ ಆಡಳಿತ ಮಂಡಳಿಯ ಆಯ್ಕೆ ಪ್ರಕ್ರಿಯೆಯಲ್ಲಿ ೨೦೨೫-೨೬ ನೇ ಸಾಲಿನ ನೂತನ ಅಧ್ಯಕ್ಷರನ್ನಾಗಿ ವಿನಯ್ ಆಚಾರ್ಯ ಮುಂಡ್ಕೂರು, ಉಪಾಧ್ಯಕ್ಷರನ್ನಾಗಿ ಭಾಸ್ಕರ್ ಉದ್ಯಾವರ, ಕಾರ್ಯದರ್ಶಿಯನ್ನಾಗಿ ಸೋನಿ ಪ್ರಭುದನ್ರವರನ್ನು ಆಯ್ಕೆ ಮಾಡಲಾಯಿತು.
ಜೊತೆ ಕಾರ್ಯದರ್ಶಿಯಾಗಿ ಕು.ರಮ್ಯಾ ಕಾಮತ್, ಕೋಶಾಧಿಕಾರಿಯಾಗಿ ಕು. ಪಲ್ಲವಿ ಕೊಡಗು, ಸಾರ್ವಜನಿಕ ಸಂಪರ್ಕಾಧಿಕಾರಿ ಯಾಗಿ ಶುಭಲಕ್ಷ್ಮೀ ಕಡೆಕಾರ್ ಮತ್ತು ನಿರ್ದೇಶಕರಾಗಿ ಕಾಪು ಶ್ರೀಕಾಂತ್ ಆಚಾರ್ಯ, ಸುದರ್ಶನ್ ಪಡುಕೆರೆ, ರಾಕೇಶ್ ಆಚಾರ್ಯ ಹಾಗೂ ಕುಮಾರ್ ಪಿ ಇವರನ್ನು ನೇಮಿಸಲಾಯಿತು.
ವೇದಿಕೆಯ ಗೌರವ ಸಲಹೆಗಾರರನ್ನಾಗಿ ಗುರುರಾಜ್ ಮಾರ್ಪಳ್ಳಿ, ಬಾಸುಮ ಕೊಡಗು, ಜಯರಾಂ ನೀಲಾವರ, ಇವರನ್ನು ಆಯ್ಕೆ ಮಾಡಲಾಯಿತು. ಜೀವನ್ ಶೆಟ್ಟಿಯವರು ವೇದಿಕೆಯ ಲೆಕ್ಕಪರಿಶೋಧಕರಾಗಿ ನಿಯೋಜಿಸಲಾಯಿತು.