ಲಾರಿ ಅಪಘಾತ ಚಾಲಕ ಸ್ಥಳದಲ್ಲಿ ಸಾವು ಕಾರವಾರ

Spread the love

: ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ದುಂಡುಕುಳಿ ರಾಷ್ಟ್ರೀಯ ಹೆದ್ದಾರಿ 66ರ ಬದಿಯಲ್ಲಿ ನಿಂತ ಲಾರಿಗೆ ಹಿಂಬದಿಯಿಂದ ಅತೀವವಾಗಿ ಗುದ್ದಿದ ಪರಿಣಾಮ ಲಾರಿ ಚಾಲಕ ಮೃತಪಟ್ಟ ಘಟನೆ ನಡೆದಿದೆ.ಸರಕು ಸಾಗಿಸುತ್ತಿದ್ದ ಲಾರಿ ಪಂಚ್ಚರ್ ಆದ ಕಾರಣ ಲಾರಿ ಚಾಲಕ ಟೈಯರ್ ಬದಲಿಸುತ್ತಿರುವ ಸಂದರ್ಭದಲ್ಲಿ ಅಂಕೋಲಾ ದಿಂದ ಕುಮಟಾ ಕಡೆಗೆ ವೇಗವಾಗಿ ಸಾಗುತ್ತಿದ್ದ ಲಾರಿ ಬಂದು ಪಂಚ್ಚರ್ ಆದ ಲಾರಿಗೆ ಗುದ್ದಿದ ಪರಿಣಾಮ ಟೈಯರ್ ಬದಲಾಯಿಸುತ್ತಿದ್ದ ಚಾಲಕ ಲಾರಿಯಡಿಗೆ ಸಿಲುಕಿ ಸ್ಥಳದಲ್ಲಿ ಮೃತಪಟ್ಟಿದ್ದಾರೆ.ಮೃತ ಲಾರಿ ಚಾಲಕ ಉತ್ತರ ಪ್ರದೇಶದ ಧರ್ಮಾಪುರ ನಿವಾಸಿ ಸಿಕೀಲ್ ಅಹಮ್ಮದ್ (45) ವರ್ಷ ಎಂದು ಗುರುತಿಸಲಾಗಿದೆ.ಅಪಘಾತ ಪಡಿಸಿದ ಲಾರಿ ಚಾಲಕ ಉತ್ತರ ಪ್ರದೇಶದ ಸುಲ್ತಾನ್ ಪುರ ಪವನ್ ಸಿಂಗ್ (40)ಗಾಯಗೊಂಡಿದ್ದಾನೆ.ಇತನನ್ನು ಹೆಚ್ಚಿನ ಚಿಕಿತ್ಸೆ ಗಾಗಿ ಕುಮಟಾ ಸರಕಾರಿ ಆಸ್ಪತ್ರೆ ಗೆ ಸಾಗಿಸಲಾಗಿದೆ.ಈ ಪ್ರಕರಣ ಕುಮಟಾ ಪೋಲಿಸ ಠಾಣೆಯಲ್ಲಿ ದಾಖಲಿಸಲಾಗಿದೆ,

Right Click Disabled