ಮಂಗ ಬೆದರಿಸುವ ವೇಳೆ ಅಚಾನಕ್ ಕಾರ್ಮಿಕನಿಗೆ ತಾಗಿದ ಗುಂಡು

Spread the love

ಶಿರಸಿ: ತೋಟದ ಮಾಲೀಕ ನಾಡ ಬಂದೂಕಿನಿಂದ‌ ಮಂಗನಿಗೆ ಬೆದರಿಸುವ ವೇಳೆ ಅಚಾನಕ್ ಆಗಿ ಗುಂಡು ಮನೆಗೆ‌ ಕೆಲಸಕ್ಕೆ ಬಂದ ಕಾರ್ಮಿಕನಿಗೆ ತಾಗಿ ಗಾಯಗೊಂಡ ಘಟನೆ‌ ತಾಲೂಕಿನ ಬಕ್ಕಳದಲ್ಲಿ‌ ಶುಕ್ರವಾರ ನಡೆದಿದೆ.

ದೇವರು‌ ಪಿ.ಭಟ್ಟ‌ ಬಕ್ಕಳ ಆರೋಪಿಯಾಗಿದ್ದು,‌ ಕೇಶವ ಮರಾಠೆ ಔಡಾಳ (27) ಅವರ ಕೈ ಹಾಗೂ ತಲೆ ಭಾಗಕ್ಕೆ ಏಟಾಗಿದೆ.

ಶಿರಸಿ ಗ್ರಾಮೀಣ ಪೊಲೀಸರು ಪ್ರಕರಣ ‌ದಾಖಲಿಸಿಕೊಂಡಿದ್ದಾರೆ.

ಗಾಯಾಳುವಿಗೆ ಚಿಕಿತ್ಸೆ ನೀಡಲಾಗುತ್ತಿದೆ.

Right Click Disabled