ಸುಖ ಸಿಗುವುದು ವಿದ್ಯೆಯಿಂದಲೇ ಹೊರತು ವಸ್ತುಗಳಿಂದ ಅಲ್ಲ

ವಿದ್ಯಾರ್ಥಿಗಳು ಈ ದೇಶದ ಶಕ್ತಿ. ಆದ್ದರಿಂದ ನಮ್ಮ ಬುದ್ದಿ ವಿದ್ಯೆ ಎಲ್ಲವೂ ದೇಶದ ಏಳಿಗೆಗೆ ಪೂರಕವಾಗಿರಬೇಕು. ಅದಕ್ಕಾಗಿ ವಿದ್ಯಾರ್ಥಿಗಳು ಸದಾ ಉಪಾಸನೆ ಉಪಯೋಗ ಹಾಗೂ ಉಪದೇಶದ ಕುರಿತು ಚಿಂತಿಸಿದರೆ ಉತ್ತಮ. ಧ್ಯಾನ, ಸಾತ್ವಿಕ ಆಹಾರ, ಜಾಗೃತ ಮನೋಭಾವದೊಂದಿಗೆ ದೇಶಕಟ್ಟುವ ಕಾಯಕದಲ್ಲಿ ನಮ್ಮ ವಿದ್ಯಾರ್ಥಿಗಳು ನಿರತರಾಗಿರಬೇಕು ಎಂದು ಅದಮಾರು ಸಮೂಹ ಶಿಕ್ಷಣ ಸಂಸ್ಥೆಗಳ ಯಅಧ್ಯಕ್ಷರಾದ ಶ್ರೀ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ಹಾರೈಸಿದರು. ಅವರು ದಿನಾಂಕ 18.09.2025ನೇ ಗುರುವಾರದಂದು ನಡೆದ ಶ್ರೀ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ವಿದ್ಯಾರ್ಥಿ ಸಂಘವನ್ನು ಉದ್ಘಾಟಿಸಿ ಆಶೀರ್ವದಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅಭ್ಯಾಗತರಾಗಿ ಆಗಮಿಸಿದ್ದ ಭಾರತೀಯ ಜ್ಞಾನ ವ್ಯವಸ್ಥಾಪನಾ ಕೇಂದ್ರ, ನಿಟ್ಟೆ ಮಹಾವಿದ್ಯಾಲಯದ ನಿರ್ದೇಶಕರಾದ ಡಾ. ಸುಧೀರ್ ರಾಜ್.ಕೆ ಅವರು ಮಾತನಾಡಿ ಭಗವದ್ಗೀತೆಯಲ್ಲಿ ನಮ್ಮ ಜೀವನದ ಯಶಸ್ವಿಗೆ ಬೇಕಾದ ಎಲ್ಲಾ ಮೌಲ್ಯಗಳು ದೊರಕುತ್ತವೆ. ಜಗದ್ಗುರುವಾದ ಶ್ರೀ ಕೃಷ್ಣನು ಅರ್ಜುನನಿಗೆ ಅಂದು ಮಾಡಿದ ಉಪದೇಶವು ನಮ್ಮ ಇಂದಿನ ವಿದ್ಯಾರ್ಥಿಗಳಿಗೂ ಅವರ ಬದುಕಿನ ಸವಾಲುಗಳನ್ನು ಎದುರಿಸಲು ಅತ್ಯುತ್ತಮ ಸಾಧನ. ನಿಮ್ಮ ಸಂಸ್ಥೆಗಿರುವ ಪೂರ್ಣಪ್ರಜ್ಞ ಎಂಬ ಹೆಸರೇ ನಿಮಗೆ ಅತ್ಯಂತ ಶ್ರೇಯಸ್ಕರವಾದದ್ದು. ಆದ್ದರಿಂದ ಇಲ್ಲಿಂದ ಪದವಿ ಪಡೆದು ಹೋಗುವ ಎಲ್ಲಾ ವಿದ್ಯಾರ್ಥಿಗಳು ಪರಿಪೂರ್ಣ ವ್ಯಕ್ತಿಗಳಾಗಿ ಹೊರಹೊಮ್ಮುವಂತಾಗಲಿ ಎಂದು ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಆಡಳಿತ ಮಂಡಳಿಯ ಗೌರವ ಕಾರ್ಯದರ್ಶಿಗಳಾದ ಶ್ರೀ ಸಿಎ. ಟಿ. ಪ್ರಶಾಂತ್ ಹೊಳ್ಳ ಅವರು ವಹಿಸಿಕೊಂಡಿದ್ದರು. ವೇದಿಕೆಯ ಮೇಲೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಚಂದ್ರಕಾಂತ್ ಭಟ್, ಕಾಲೇಜಿನ ಐಕ್ಯುಎಸಿ ಸಂಯೋಜಕರಾದ ಡಾ. ರಾಘವೇಂದ್ರ ಎಲ್. ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿಗಳಾದ ಶ್ರೀ ವಿನಾಯಕ್ ಪೈ ಹಾಗೂ ಡಾ. ಪ್ರಜ್ಣಾ ಮಾರ್ಪಳ್ಳಿ ಉಪಸ್ಥಿಕರಿದ್ದರು. ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಾಗಿ ಆಯ್ಕೆಯಾದ ಅಧ್ಯಕ್ಷರಾದ ಗಗನ್ ಕೆ ಸುವರ್ಣ, ಉಪಾಧ್ಯಕ್ಷರಾದ ಧೀರಜ್, ಕಾರ್ಯದರ್ಶಿಯಾದ ಕು. ಖುಷಿ, ಉಪಕಾರ್ಯದರ್ಶಿಯಾದ ಉಜ್ವಲ ನಾಯಕ್ ಇವರನ್ನು ಹಾಗೂ ಎಲ್ಲಾ ತರಗತಿಯ ವಿದ್ಯಾರ್ಥಿ ಪ್ರತಿನಿಧಿಗಳನ್ನೂ, ವಿವಿಧ ಅಸೋಸಿಯೇಷನ್ನಿನ ಪ್ರತಿನಿಧಿಗಳನ್ನು ಪೂಜ್ಯ ಶ್ರೀಪಾದರು ಅನುಗ್ರಹಿಸಿದರು. ಇದೇ ಸಂದರ್ಭದಲ್ಲಿ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕರುಗಳಾದ ಶ್ರೀಮತಿ ಲವಿಟ ಡಿಸೋಜ , ಶ್ರೀಮತಿ ಗೌರಿ ಶೆಣೈ ಮತ್ತು ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ರಾಘವೇಂದ್ರ ಜಿಗಳೂರು ಇವರ ಕೃತಿಗಳನ್ನು ಪರಮ ಪೂಜ್ಯ ಶ್ರೀಪಾದರು ಲೋಕಾರ್ಪಣೆಗೊಳಿಸಿದರು. ಡಾ.ಪ್ರಜ್ಞಾ ಮಾರ್ಪಳ್ಳಿ ಸ್ವಾಗತಿಸಿ, ಶ್ರೀ ವಿನಾಯಕ್ ಪೈ ಅವರು ವಂದಿಸಿದರು. ವಿದ್ಯಾರ್ಥಿನಿ ಕು. ರಾನಿಯಾ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.
