ಸಹಯೋಗ” :‘ ಟೈಪ್ 1 ಮಧುಮೇಹ ಹೊಂದಿರುವ ಮಕ್ಕಳಿಗಾಗಿ ಸಮಗ್ರ ಆರೈಕೆ” ಕಾರ್ಯಕ್ರಮಕ್ಕೆ ಮಾಹೆ ಮಣಿಪಾಲದಲ್ಲಿ ಚಾಲನೆ , ಇದು ಕಸ್ತೂರ್ಬಾ ಆಸ್ಪತ್ರೆಯ ಮಕ್ಕಳ ಚಿಕಿತ್ಸಾ ವಿಭಾಗದ ಉಪಕ್ರಮವಾಗಿದ್ದು ಮಣಿಪಾಲ ಫೌಂಡೇಶನ್‌ನಿಂದ ಬೆಂಬಲಿತವಾಗಿದೆ.

Spread the love

ಮಣಿಪಾಲ, ಫೆಬ್ರವರಿ 7, 2025: “ಸಹಯೋಗ” :‘ ಟೈಪ್ 1 ಮಧುಮೇಹ ಹೊಂದಿರುವ ಮಕ್ಕಳಿಗಾಗಿ ಸಮಗ್ರ ಆರೈಕೆ” ಕಾರ್ಯಕ್ರಮಕ್ಕೆ ಮಾಹೆ ಮಣಿಪಾಲದಲ್ಲಿ ಇಂದು ಚಾಲನೆ ನೀಡಲಾಯಿತು , ಇದು ಕಸ್ತೂರ್ಬಾ ಆಸ್ಪತ್ರೆಯ ಮಕ್ಕಳ ಚಿಕಿತ್ಸಾ ವಿಭಾಗದ ಉಪಕ್ರಮವಾಗಿದ್ದು ಮಣಿಪಾಲ ಫೌಂಡೇಶನ್‌ನಿಂದ ಬೆಂಬಲಿತವಾಗಿದೆ. ಈ ಉಪಕ್ರಮವನ್ನು ಎಂಇಎಂಜಿ ಮುಖ್ಯಸ್ಥರು ಮತ್ತು ಮಾಹೆ ಟ್ರಸ್ಟ್‌ನ ಅಧ್ಯಕ್ಷರಾದ ಡಾ. ರಂಜನ್ ಆರ್ ಪೈ ಅವರು ಅಧಿಕೃತವಾಗಿ ಉದ್ಘಾಟಿಸಿದರು, ಅವರು ಮೊದಲ ಕಿಟ್ ಅನ್ನು ಮಕ್ಕಳ ವಿಭಾಗದ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥರಾದ ಡಾ. ಲೆಸ್ಲಿ ಎಡ್ವರ್ಡ್ ಎಸ್ ಲೆವಿಸ್, ಎಂಡೋಕ್ರಿನೊಲೊಜಿ ವಿಭಾಗದ ಪ್ರಾಧ್ಯಾಪಕಿ ಮತ್ತು ಮುಖ್ಯಸ್ಥೆ ಡಾ. ಸಹನಾ ಶೆಟ್ಟಿ ಮತ್ತು ಮಕ್ಕಳ ಎಂಡೋಕ್ರಿನೊಲೊಜಿಸ್ಟ್ ಹಾಗೂ ಮಕ್ಕಳ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ. ಕೌಶಿಕ್ ಉರಾಳ ಎಚ್ ಅವರಿಗೆ ಹಸ್ತಾಂತರಿಸಿದರು. ಮಾಹೆ ಮಣಿಪಾಲದ ಸಹ ಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್ , ಉಪ ಕುಲಪತಿ ಲೆಫ್ಟಿನೆಂಟ್ ಜನರಲ್ (ಡಾ) ಎಂ.ಡಿ. ವೆಂಕಟೇಶ್ ವಿ.ಎಸ್.ಎಂ (ನಿವೃತ್ತ), ಮಣಿಪಾಲ ಫೌಂಡೇಶನ್‌ನ ಸಿಇಒ ಡಾ. ಹರಿನಾರಾಯಣ್ ಶರ್ಮಾ ಇತರ ಗಣ್ಯರು ಉಪಸ್ಥಿತರಿದ್ದರು.

‘ಸಹಯೋಗ” :‘ ಟೈಪ್ 1 ಮಧುಮೇಹ ಹೊಂದಿರುವ ಮಕ್ಕಳಿಗಾಗಿ ಸಮಗ್ರ ಆರೈಕೆ ಈ ಉಪಕ್ರಮಕ್ಕೆ, ಮಣಿಪಾಲ್ ಫೌಂಡೇಶನ್‌ನಿಂದ ಆರ್ಥಿಕ ಸಹಾಯ ಪಡೆಯಲಿದೆ. ಈ ಉಪಕ್ರಮವು ಟೈಪ್ 1 ಡಯಾಬಿಟಿಸ್ ಮೆಲ್ಲಿಟಸ್ (T1DM) ನಿಂದ ಬಳಲುತ್ತಿರುವ ಮಕ್ಕಳಿಗೆ ಆರೈಕೆಯ ತುರ್ತು ಅಗತ್ಯವನ್ನು ಪರಿಹರಿಸುತ್ತದೆ. ಈ ಕಾರ್ಯಕ್ರಮವು ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಉತ್ತಮ ಗುಣಮಟ್ಟದ ಇನ್ಸುಲಿನ್, ಇನ್ಸುಲಿನ್ ಪೆನ್ನುಗಳು, ಗ್ಲುಕೋಮೀಟರ್‌ಗಳು, ಗ್ಲೂಕೋಸ್ ಪರೀಕ್ಷಾ ಪಟ್ಟಿಗಳು ಚಿಕಿತ್ಸೆಗಳನ್ನು ಅತ್ಯಂತ ಕಡಿಮೆ ದರದಲ್ಲಿ ಒದಗಿಸುತ್ತದೆ, ಮತ್ತು ಈ ಮಕ್ಕಳು ಅರ್ಹವಾದ ಆರೈಕೆಯನ್ನು ಪಡೆಯುವುದನ್ನು ಖಚಿತಪಡಿಸುತ್ತದೆ. ಅಲ್ಲದೇ ಈ ಕಾರ್ಯಕ್ರಮವು ಬಾಲ್ಯದ ಮಧುಮೇಹ ಆರೈಕೆಯಲ್ಲಿ ಎಲ್ಲಾ ಪಾಲುದಾರರನ್ನು – ಪೋಷಕರು, ತಜ್ಞರು ಮತ್ತು ಶಿಕ್ಷಕರನ್ನು – ಒಂದೇ ವೇದಿಕೆಯಲ್ಲಿ ಒಟ್ಟುಗೂಡಿಸುವ ಗುರಿಯನ್ನು ಹೊಂದಿದೆ, ಇದು T1DM ಹೊಂದಿರುವ ಮಕ್ಕಳಿಗೆ ಉತ್ತಮ ಫಲಿತಾಂಶಗಳನ್ನು ಖಚಿತಪಡಿಸುತ್ತದೆ.

ಮಾಹೆ ಮಣಿಪಾಲದ ಸಹ ಕುಲಾಧಿಪತಿ ಡಾ. ಹೆಚ್.ಎಸ್. ಬಲ್ಲಾಳ್ ಮಾತನಾಡಿ , “ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವ ಮಹತ್ವವನ್ನು ಒತ್ತಿ ಹೇಳಿದರು. ಸಮುದಾಯ ಆರೋಗ್ಯವನ್ನು ಉತ್ತೇಜಿಸಲು ಮತ್ತು T1DM ನಂತಹ ದೀರ್ಘಕಾಲದ ಆರೋಗ್ಯ ಪರಿಸ್ಥಿತಿಗಳನ್ನು ಹೊಂದಿರುವ ಎಲ್ಲಾ ಮಕ್ಕಳಿಗೆ ಅಗತ್ಯ ವೈದ್ಯಕೀಯ ಸಂಪನ್ಮೂಲಗಳು ಲಭ್ಯವಾಗುವಂತೆ ನೋಡಿಕೊಳ್ಳಲು ಮಾಹೆಯ ಬದ್ಧತೆಯನ್ನು ಸಹಯೋಗ ಉಪಕ್ರಮವು ಪ್ರತಿಬಿಂಬಿಸುತ್ತದೆ” ಎಂದು ಅವರು ಹೇಳಿದರು.

ಮಾಹೆಯ ಉಪಕುಲಪತಿ ಲೆಫ್ಟಿನೆಂಟ್ ಜನರಲ್ (ಡಾ) ಎಂ ಡಿ ವೆಂಕಟೇಶ್ ವಿಎಸ್ಎಂ (ನಿವೃತ್ತ) ಅವರು ಕಾರ್ಯಕ್ರಮದಲ್ಲಿ ಮಾತನಾಡಿ, “ಈ ಉಪಕ್ರಮವು ಆರೋಗ್ಯ ರಕ್ಷಣೆಯ ಪ್ರವೇಶವನ್ನು ಸುಧಾರಿಸಲು ಮತ್ತು ಸಮಾಜಕ್ಕೆ ಪ್ರಯೋಜನಕಾರಿಯಾದ ಸಹಯೋಗಗಳನ್ನು ಬೆಳೆಸಲು ವಿಶ್ವವಿದ್ಯಾಲಯದ ಪ್ರಯತ್ನಗಳನ್ನು ಹೇಗೆ ಬಲಪಡಿಸುತ್ತದೆ ಎಂಬುದನ್ನು ಎತ್ತಿ ತೋರಿಸಿದರು. ಮಾಹೆಯ ಗಮನವು ಶಿಕ್ಷಣದ ಮೇಲೆ ಮಾತ್ರವಲ್ಲದೆ ವಿಶಾಲ ಸಮುದಾಯಕ್ಕೆ, ವಿಶೇಷವಾಗಿ ವಿಶೇಷ ಆರೈಕೆ ಅಗತ್ಯವಿರುವ ಮಕ್ಕಳಿಗೆ ಸೇವೆ ಸಲ್ಲಿಸುವುದರ ಮೇಲೆಯೂ ಇದೆ ಎಂದು ಅವರು ಹೇಳಿದರು. ಈ ಆರ್ಥಿಕ ನಿಧಿ ಮತ್ತು ಉಪಕ್ರಮವು ಮಾಹೆ ಮಣಿಪಾಲದ ಅಡಿಯಲ್ಲಿ ಬರುವ ಎಲ್ಲ ಬೋಧನಾ ಆಸ್ಪತ್ರೆಗಳಲ್ಲಿ ಟೈಪ್ 1 ಮಧುಮೇಹ ಹೊಂದಿರುವ ಅರ್ಹ ಮಕ್ಕಳ ರೋಗಿಗಳಿಗೆ ಪ್ರಯೋಜನವನ್ನು ನೀಡುತ್ತದೆ, ಅಗತ್ಯವಿರುವ ಮಕ್ಕಳಿಗೆ ಸಮಗ್ರ ಆರೈಕೆ ಮತ್ತು ಬೆಂಬಲವನ್ನು ಖಚಿತಪಡಿಸುತ್ತದೆ” ಎಂದು ಹೇಳಿದರು.

ಮಣಿಪಾಲ್ ಫೌಂಡೇಶನ್‌ನ ಸಿಇಒ ಡಾ. ಹರಿನಾರಾಯಣ್ ಶರ್ಮಾ, ಈ ಉಪಕ್ರಮಕ್ಕೆ ಹಣಕಾಸು ಒದಗಿಸುವಲ್ಲಿ ಪ್ರತಿಷ್ಠಾನದ ಪಾತ್ರ ಮತ್ತು ಬಡ ಜನರ ಆರೋಗ್ಯ ಸುಧಾರಣೆಗೆ ಅದರ ನಿರಂತರ ಸಮರ್ಪಣೆಯ ಬಗ್ಗೆ ಮಾತನಾಡಿದರು. ‘ಸಹಯೋಗ’- ಈ ಉಪಕ್ರಮವನ್ನು ಜೀವಂತಗೊಳಿಸುವಲ್ಲಿ ಇಡೀ ತಂಡದ ಪ್ರಯತ್ನಗಳನ್ನು ಅವರು ಶ್ಲಾಘಿಸಿದರು.

ಮಾಹೆಯ ಆರೋಗ್ಯ ವಿಜ್ಞಾನಗಳ ಸಹ-ಕುಲಪತಿ ಡಾ. ಶರತ್ ಕೆ. ರಾವ್, ರಿಜಿಸ್ಟ್ರಾರ್ ಡಾ. ಪಿ. ಗಿರಿಧರ್ ಕಿಣಿ, ಕೆಎಂಸಿ ಮಣಿಪಾಲದ ಡೀನ್ ಡಾ. ಪದ್ಮರಾಜ್ ಹೆಗ್ಡೆ, ಮಾಹೆ ಮಣಿಪಾಲದ ಬೋಧನಾ ಆಸ್ಪತ್ರೆಗಳ ಸಿ ಓ ಓ ಡಾ. ಆನಂದ್ ವೇಣುಗೋಪಾಲ್, ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ ಉಪಸ್ಥಿತರಿದ್ದರು.

ವೈದ್ಯಕೀಯ ಅಧೀಕ್ಷಕರು

Right Click Disabled