ಹೊಸ ಕಿರಣ ವೆಬ್ ನ್ಯೂಸ್ ಶಿಕ್ಷಾ ಅಭಿಯಾನ ಶಾಲೆಗೆ ಪುಸ್ತಕ, ಬ್ಯಾಗ್, ಕಲಿಕ ಪರಿಕರಗಳನ್ನು ದಾನಿಗಳ ನೆರವಿನಿಂದ ವಿತರಣೆ

Spread the love

ಬೈಂದೂರು : ಸರಕಾರಿ ಶಾಲೆ ಉಳಿಸಿ ಬೆಳಸಿ ಎನ್ನುವ ನಿಟ್ಟಿನಲ್ಲಿ ಪತ್ರಕರ್ತ ಕಿರಣ್ ಪೂಜಾರಿ ಮದ್ದುಗುಡ್ಡೆ ಕಳೆದ ಹಲವಾರು ವರ್ಷದಿಂದ ನಡೆಸಿಕೊಂಡು ಬಂದ ಶಿಕ್ಷಾ ಅಭಿಯಾನ ಅವರು ಇಂದು ಬೈಂದೂರು ವಿಧಾನಸಭಾ ಕ್ಷೇತ್ರದ ಗುಜ್ಜಾಡಿ ಗ್ರಾಮದ ಕೊಡಪಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಶೈಕ್ಷಣಿಕ ಪ್ರಸ್ತುತ ಸಾಲಿನ ವಿದ್ಯಾರ್ಥಿಗಳಿಗೆ ಬೇಕಾಗುವಂತ ಪುಸ್ತಕ, ಬ್ಯಾಗ್, ಪೆನ್ನು, ಇನ್ನಿತರ ಕಲಿಕ ಪರಿಕರವನ್ನು ದಾನಿಗಳ ನೆರವಿನಿಂದ ವಿದ್ಯಾರ್ಥಿಗಳಿಗೆ ನೀಡಿದರು.

ಪತ್ರಕರ್ತರು ಸಾರ್ವಜನಿಕ ವಲಯದಲ್ಲಿ ಸೇವೆ ಮಾಡುತ್ತಾ ಬಂದಿದ್ದಾರೆ! ಆದರೆ ಪತ್ರಕರ್ತ ಕಿರಣ್ ಪೂಜಾರಿಯವರು ಮಾತ್ರ ವಿವಿಧ ಸರಕಾರಿ ಶಾಲೆಯನ್ನು ಗುರುತಿಸಿ ಶಾಲೆಗೆ ಬೇಕಾಗುವ ಕಲಿಕ ಪರಿಕರಗಳನ್ನು ನೀಡುತ್ತಾ ಬಂದಿರುತ್ತಾರೆ, ಇಂತಹ ಸೇವೆ ಮಾಡುತ್ತಿರುವುದು ನೋಡಿ ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗುತ್ತಿದೆ.

ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕರು ಹಾಗೂ SDMC ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಮಕ್ಕಳ ಪೋಷಕರು ಪತ್ರಕರ್ತ ಕಿರಣ್ ಪೂಜಾರಿ ಅವರಿಗೆ ಗೌರವಿಸಿ ಸನ್ಮಾನಿಸಿದರು.

ಕಾರ್ಯಕ್ರಮದಲ್ಲಿ SDMC ಅಧ್ಯಕ್ಷರು, ಹೆಮ್ಮಾಡಿ ಶಿಕ್ಷಣ ಸಂಯೋಜಕ ವೃತ್ತದ ECO ಯೋಗೇಶ್, ಪುರುಷೋತ್ತಮ್ ಪೂಜಾರಿ, ಗುಜ್ಜಾಡಿ ಗ್ರಾ. ಪಂ. ಮಾಜಿ ಸದಸ್ಯ ರಾಘು ಗಾಣಿಗ, ಶಾಲೆಯ ಹಳೆ ವಿದ್ಯಾರ್ಥಿಗಳು, ಶಾಲೆಯ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕ ವೃಂದ, ಮಕ್ಕಳ ಪೋಷಕರು ಊರಿನವರು ಉಪಸ್ಥಿತರಿದ್ದರು.

Right Click Disabled