ಪ್ರಯಾಣಿಕರ ಸಮಸ್ಯೆಗೆ ಸ್ಪಂದಿಸಿದ ಉಡುಪಿ ಜಿಲ್ಲಾಶ್ರೀರಾಮಸೇನೆ ಮುಖಂಡರು*
ಪ್ರಯಾಣಿಕರ ಸಮಸ್ಯೆಗೆ ಸ್ಪಂದಿಸಿದ ಉಡುಪಿ ಜಿಲ್ಲಾಶ್ರೀರಾಮಸೇನೆ ಮುಖಂಡರು*
ಮಂಗಳೂರುನಿಂದ ದಾವಣಗೆರೆ ಗೆ ಹೊರಟ ಪ್ರತಿಷ್ಠ ಕಂಪನಿಯನ ಸಾರಿಗೆ ಬಸ್ಸಿನಲ್ಲಿ ಸಂಚರಿಸುತ್ತಿದ್ದ ರೋಗಿಗಳು ಹಾಗೂ ಇತರ ಪ್ರಯಾಣಿಕರು ಬಸ್ಸಿನಲ್ಲಿ ಸೋರುತ್ತಿದ್ದ ಅತೀವ ಮಳೆ ನೀರು ಹಾಗೂ ಸಿಬ್ಬಂದಿಯ ಅನುಚಿತ ವರ್ತನೆಯಿಂದ ಬೇಸರಗೊಂಡ ಪ್ರಯಾಣಿಕರು ಉಡುಪಿ ಜಿಲ್ಲಾ ಶ್ರೀರಾಮಸೇನೆಗೆ ಮಾಹಿತಿ ನೀಡಿದರು.
ತಕ್ಷಣವೇ ಮಾಹಿತಿ ಪಡೆದ ಉಡುಪಿ ಜಿಲ್ಲಾ ಶ್ರೀರಾಮಸೇನೆಯ ಮುಖಂಡರು ಬಸ್ ಮಾಲೀಕರ ಗಮನಕ್ಕೆ ಸಿಬ್ಬಂದಿ ಮೂಲಕ ತಂದರೂ, ಉಪಯುಕ್ತ ವಾಗದ ಕಾರಣ, ಕುಂದಾಪುರ ಬಸ್ ಆಫೀಸ್ ನಲ್ಲಿ, ಬಸ್ ಬದಲಾವಣೆ
ಮಾಡಿ ಪ್ರಯಾಣಿಕರನ್ನು ದಾವಣಗೆರೆಗೆ ಕಳುಹಿಸಲಾಯಿತು.
ಈ ಸಂದರ್ಭದಲ್ಲಿ ಶ್ರೀರಾಮಸೇನೆಯ ಉಡುಪಿ ಜಿಲ್ಲಾಧ್ಯಕ್ಷರಾದ ಜಯರಾಂ ಅಂಬೆಕಲ್ಲು ಮತ್ತು ಜಿಲ್ಲಾ ವಕ್ತಾರ ಶರತ್ ಮಣಿಪಾಲ ರವರನ್ನು ಪ್ರಯಾಣಿಕರು ಮುಕ್ತ ಕಂಠದಿಂದ ಪ್ರಶಂಸಿದರು.