ಜೈ ಕುಂದಾಪ್ರ ಸೇವಾ ಟ್ರಸ್ಟ್ (ರಿ.) ಸಂಸ್ಥೆಯ ಸಾಮಾನ್ಯ ಸಭೆ ಮತ್ತು ಸಹಾಯ ಹಸ್ತ ಹಸ್ತಾಂತರ ಕಾರ್ಯಕ್ರಮ.

Spread the love

ಕುಂದಾಪುರ: ನೊಂದವರಿಗೆ ನೆರವಿನ ದಾರಿ ದೀಪ,
ಯುವ ಮನಸ್ಸುಗಳಿಗೆ ಸ್ಫೂರ್ತಿಯಾದ ಜೈ ಕುಂದಾಪ್ರ ಸೇವಾ ಟ್ರಸ್ಟ್ (ರಿ). ಸಂಸ್ಥೆಯ ‌‌ಸಾಮಾನ್ಯ ಸಭೆ ಮತ್ತು ಸಹಾಯ ಹಸ್ತ ಹಸ್ತಾಂತರ ಕಾರ್ಯಕ್ರಮವು ಇತ್ತೀಚೆಗೆ ಶ್ರೀ ನಾಗಲಕ್ಷ್ಮಿ ಸಭಾಭವನ ಬಿದ್ಕಲ್ ಕಟ್ಟೆಯಲ್ಲಿ ಜರುಗಿತು.
ಈ ಸಂದರ್ಭದಲ್ಲಿ ಮುಂದಿನ ಹಲವು ಸಂ‍ಸ್ಥೆಯ ಯೋಜನೆಯ ವಿಷಯಗಳ ಬಗ್ಗೆ ಚರ್ಚಿಸಲಾಯಿತು. ಹಿಂದಿನ ಯೋಜನೆಯಾದ ಅಭಿಷೇಕ್ ಎನ್ನುವ ಕುಂಭಾಶಿಯ ಪುಟ್ಟ ಹುಡುಗ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದು, ಇವನಿಗೆ ಚಿಕಿತ್ಸೆಯ ವೆಚ್ಚವಾಗಿ 10,000/- ರೂ.ಗಳ ಚೆಕ್ ಅನ್ನು ಪೋಷಕರಿಗೆ ಹಸ್ತಾಂತರಿಸಲಾಯಿತು.
ಹಿಂದಿನ ಕಾರ್ಯದರ್ಶಿ ರಾಜಿನಾಮೆ ನೀಡಿದ್ದರಿಂದ ನೂತನ ಕಾರ್ಯದರ್ಶಿಯಾಗಿ ಸಂಸ್ಥೆಯ ಮಹಿಳಾ ಘಟಕದಲ್ಲಿ ಕಾರ್ಯ ನಿರ್ವಹಿಸುತ್ತಿರುವ ದಿವ್ಯ ಕುಂದಾಪುರ ಅವರನ್ನು ಸಭೆಯಲ್ಲಿ ಆಯ್ಕೆ ಮಾಡಲಾಯಿತು.
ಸಂಸ್ಥೆಯ ಲೆಕ್ಕ ಪತ್ರ ಓದಿ ತಿಳಿಸಿ, ಈಗಾಗಲೇ ಸಂಸ್ಥೆಯ ಯೋಜನೆಗಳಿಗೆ ಧನ ಸಹಾಯ ಮಾಡಿರುವವರಿಗೆ ಧನ್ಯವಾದ ಸಮರ್ಪಿಸಲಾಯಿತು.
ಮುಂದಿನ ತಿಂಗಳಲ್ಲಿ ನಡೆಯುವ ಕೋಟೇಶ್ವರ ಕೊಡಿ ಹಬ್ಬದಲ್ಲಿ ದೇಣಿಗೆ ಸಂಗ್ರಹಿಸುವುದು ಹಾಗೂ ದೀಪಾವಳಿ ಹಬ್ಬವನ್ನು ನಿರಾಶ್ರಿತರ ಆಶ್ರಮದಲ್ಲಿ ಆಚರಿಸುವುದೆಂದು ಸಭೆಯಲ್ಲಿ ತೀರ್ಮಾನಿಸಲಾಯಿತು.
ಮುಂದಿನ ಕಾರ್ಯಕ್ರಮ ಜೈ ಕುಂದಾಪ್ರ ಸಮಾಗಮ- 2023 ಮತ್ತು ಸಹಾಯ ಹಸ್ತ ಹಸ್ತಾಂತರದ ಬಗ್ಗೆ ಚರ್ಚಿಸಲಾಯಿತು. ಆಗಮಿಸಿದ ಎಲ್ಲರಿಗೂ ಲಘು ಉಪಹಾರ ವ್ಯವಸ್ಥೆ ಮಾಡಲಾಯಿತು.
ಜೈ ಕುಂದಾಪ್ರ ಸೇವಾ ಟ್ರಸ್ಟ್ (ರಿ.) ಸಂಸ್ಥೆಯ ಸ್ಥಾಪಕಾಧ್ಯಕ್ಷ ಪುಂಡಲೀಕ ಮೊಗವೀರ್ ತೆಕ್ಕಟ್ಟೆ, ಗೌರವ ಸಲಹೆಗಾರರಾದ ಆದಿತ್ಯ ಕೋಟ, ಮನೀಶ್ ಕುಲಾಲ್ ಜನ್ನಾಡಿ, ಸಂದೀಪ್ ಅಮಾಸೆಬೈಲು, ಆಕಾಶ್ ಮೊಗವೀರ, ಸುಕೇಶ್ ಬಿದ್ಕಲ್ ಕಟ್ಟೆ, ಭರತ್, ರಾಘವೇಂದ್ರ, ನಾಗರಾಜ್, ಹರೀಶ್ ನಾಯ್ಕ್, ಅವಿನಾಶ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Right Click Disabled