ಕೆಪಿಸಿಸಿ ಮೀನುಗಾರ ವಿಭಾಗದ ಅದ್ಯಕ್ಷರಾದ ಮಂಜುನಾಥ ಸುಣಗಾರ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿ ಯೋಗೇಶ್ ಶಿರೂರ್ ಆಗ್ರಹ

Spread the love

ಬೈಂದೂರು : ಮೀನುಗಾರರ ಸಮುದಾಯದ ಯುವ ನಾಯಕರಾಗಿ , ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷದ ಮೀನುಗಾರರ ವಿಭಾಗದ ರಾಜ್ಯಾಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷದ ಮೀನುಗಾರರ ವಿಭಾಗವನ್ನು ತಳಮಟ್ಟದಿಂದ ಕಟ್ಟಿ ಬೆಳೆಸಿದ ಯುವ ರಾಜಕಾರಣಿ ಮಂಜುನಾಥ ಸುಣಗಾರ ಅವರನ್ನು ವಿಧಾನ ಪರಿಷತ್ತಿನ ಸದಸ್ಯರನ್ನಾಗಿ ನೇಮಕ ಮಾಡಬೆಕೆಂದು ಉಡುಪಿ ಜಿಲ್ಲೆಯ ಬೈಂದೂರು ವಿಧಾನ ಸಭಾ ಕ್ಷೇತ್ರದ ಮೊಗವೀರ ಸಮುದಾಯದ ಯುವ ಮುಂದಾಳು, ಕಾಂಗ್ರೆಸ್ ಪಕ್ಷದ ಯುವ ಮುಖಂಡರಾದ ಯೋಗೇಶ್ ಶಿರೂರು ಅವರು ಕಾಂಗ್ರೆಸ್ ಪಕ್ಷ ದ ರಾಷ್ಟ್ರೀಯ ಮತ್ತು ರಾಜ್ಯ ಮುಖಂಡರನ್ನು ಆಗ್ರಹಿಸಿರುತ್ತಾರೆ.

ಮಂಜುನಾಥ ಸುಣಗಾರ ಅವರು ಹಗಲು ರಾತ್ರಿ ಎನ್ನದೇ ಸಮುದಾಯದ ಹಲವಾರು ಗುಂಪುಗಳಾಗಿ ವಿವಿಧ ಪಕ್ಷಗಳೊಡನೆ ಸಂಬಂದ ಹೊಂದಿದ್ದನ್ನು ಒಗ್ಗೂಡಿಸಿ ಕಾಂಗ್ರೆಸ್ ಪಕ್ಷದ ಪರ ಒಕ್ಕೂರಲಿನ ಧ್ವನಿಯಾಗಿ ಸಮುದಾಯವನ್ನು ಮುನ್ನೆಡಿಸಿಕೊಂಡು ಬಂದಿರುತ್ತಾರೆ. ಎಷ್ಟೋ ಮೀನುಗಾರರ ಜನಾಂಗದವರು ಕಾಂಗ್ರೆಸ್ ಪಕ್ಷವನ್ನು ಈ ಹಿಂದೆ ಬಿಟ್ಟು ಹೋದರೂ ಕೂಡ ಒಬ್ಬ ಛಲದಂಕಮಲ್ಲನಾಗಿ, ಪಕ್ಷನಿಷ್ಟನಾಗಿ, ಎಐಸಿಸಿ ನಾಯಕರುಗಳಾದ ಸನ್ಮಾನ್ಯ ಶ್ರೀ ರಾಹುಲ್ ಗಾಂಧಿ ಹಾಗೂ ಸನ್ಮಾನ್ಯ ಶ್ರೀಮತಿ ಪ್ರಿಯಾಂಕಾ ಗಾಂಧಿಯವರು, ಸನಾನ್ಯ ಮುಖ್ಯಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿಗಳು ಹಾಗೂ ಕೆಪಿಸಿಸಿ ಅದ್ಯಕ್ಷರಾದ ಶ್ರಿ ಡಿ ಕೆ ಶಿವಕುಮಾರ್ ಹಾಗೂ ಗ್ರಹ ಸಚಿವರು ಮಾಜಿ ಉಪಮುಖ್ಯಮಂತ್ರಿಗಳಾದ ಡಾ ಜಿ ಪರಮೇಶ್ವರ, ಮತ್ತು ಕೇರಳದ ಲೋಕಸಭಾ ಸದಸ್ಯರು ಅಖಿಲ ಭಾರತ ಮೀನುಗಾರ ಕಾಂಗ್ರೆಸ್ ನ ಮಾಜಿ ರಾಷ್ಟ್ರೀಯ ಅದ್ಯಕ್ಷರಾದ ಟಿ ಎನ್ ಪ್ರತಾಪನ್ ಇವರುಗಳ ಆದೇಶದ ಮೇರೆಗೆ ಎಲ್ಲಾ ಹಂತದ ಚುನಾವಣೆಗಳಲ್ಲಿ ಸಕ್ರೀಯನಾಗಿ , ಮೊಗವೀರ ಸಮುದಾಯದ ಧೀಮಂತ ನಾಯಕ ದಿವಂಗತ ಯು ಆರ್ ಸಭಾಪತಿಯವರ ಮಾರ್ಗದರ್ಶನದಲ್ಲಿ ಅವರ ಪ್ರೀತಿಯ ಶಿಷ್ಯನಾಗಿ ಕಾಂಗ್ರೆಸ್ ಪಕ್ಷದ ಮೀನುಗಾರ ವಿಭಾಗವನ್ನು ರಾಜ್ಯದಲ್ಲಿಯೇ ಸದ್ರಢಗೊಳಿಸಿದ ಕೀರ್ತಿಯ ಜೋತೆಗೆ ಮೀನುಗಾರರ ಸಮುದಾಯದ ಯಶಸ್ವಿ ನಾಯಕರಾಗಿ ಮಂಜುನಾಥ ಸುಣಗಾರ ಅವರು ಹೊರಹೊಮ್ಮಿದ್ದಾರೆ.

ಅವರು ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡದಿನದಿಂದ ಪಕ್ಷ ಅಧಿಕಾರಕ್ಕೆ ಬರುವ ವರೆಗೂ ಪ್ರತಿ ಜಿಲ್ಲೆ ಹಾಗೂ ವಿಧಾನ ಸಭಾ ಕ್ಷೇತ್ರದಲ್ಲಿ ಕ್ರೀಯಾಶೀಲ ಸಮಿತಿಗಳನ್ನು ರಚಿಸಿ ಸಮುದಾಯದ ಜನರ ಮನವೊಲಿಸಿ ಪಕ್ಷಕ್ಕೆ ಸೇರ್ಪಡಿಸುವ ಹಾಗೂ ಪಕ್ಷಕ್ಕೆ ಶಕ್ತಿ ನೀಡುವ ಕೆಲಸ ಮಾಡಿದ್ದಾರೆ. ಹಾಗೇಯೇ ಸಮುದಾಯದ ಸಮಸ್ಸೆಗಳನ್ನು ಆಲಿಸಿ ಪರಿಹರಿಸುವ ಕೆಲಸಗಳನ್ನು ಹಾಗೂ ಮೀನುಗಾರರ ಸಂಕಷ್ಟಗಳ ಬಗ್ಗೆ ಸ್ಥಳೀಯ ಮೀನುಗಾರರ ಬಳಿ ದಾವಿಸಿ ಇಲಾಖೆ ಅಧಿಕಾರಿಗಳನ್ನು ಬೇಟಿ ಮಾಡಿ ಅವರ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸಾಕಷ್ಟು ಯಶಸ್ವಿಯಾಗಿದ್ದಾರೆ.

ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮೀನುಗಾರರ ಸಮಸ್ಯೆಗಳನ್ನು ಹಾಗೂ ಬಂದರುಗಳ ಸಮಸ್ಯೆ, ಮೀನು ಮಾರಾಟಗಾರರ , ಮಹಿಳಾ ಮೀನುಗಾರರ ಸಮಸ್ಯೆಗಳನ್ನು ನಾಡದೋಣಿ ಮೀನುಗಾರರ ಸಮಸ್ಸೆಗಳನ್ನು ಹೀಗೆ ಸಾಂಪ್ರದಾಯಿಕ ಹಾಗೂ ವ್ರತ್ತಿಪರ ಮೀನುಗಾರರ ಸಮಸ್ಸೆಗಳನ್ನು ಪ್ರತ್ಯೇಕವಾಗಿ ಆಲಿಸಿ ಅನೇಕಬಾರಿ ಅವರ ಸಮಸ್ಯೆಗಳನ್ನು ಪರಿಹರಿಸಲು ರಾಜ್ಯ ಹಾಗೂ ಕೇಂದ್ರದ ಮೀನುಗಾರಿಕಾ ಸಚಿವರ ಬಳಿ ಮೀನುಗಾರರ ನಿಯೋಗವನ್ನು ಕರೆದೊಯ್ದು ಸಮಸ್ಸೆಗಳಿಗೆ ಸ್ಪಂದಿಸುವಂತೆ ಮನವಿ ಸಲ್ಲಿಸಿದ್ದಾರೆ. ಮಾತ್ರವಲ್ಲದೆ ಮೀನುಗಾರರ ಬಹುದಿನಗಳ ಬೇಡಿಕೆಗಳನ್ನು ಈ ಬಾರಿಯ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ಯಲ್ಲಿ ಸೇರಿಸುವಂತೆ ಮಂಜುನಾಥ ಸುಣಗಾರ ಅವರು ಪಕ್ಷದ ವರಿಷ್ಠರಿಗೆ ಭೇಟಿಯಾಗಿ ಮನವಿ ಸಲ್ಲಿಸಿ ಪ್ರಣಾಳಿಕೆಯಲ್ಲಿ ಬೇಡಕೆಗಳನ್ನು ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಬಾರಿಯ ಕಾಂಗ್ರೆಸ್ ಪಕ್ಷವು ಅತ್ಯಧಿಕ ಸ್ಥಾನಗಳನ್ನು ರಾಜ್ಯದಲ್ಲಿ ಪಡೆದುಕೊಂಡಿದ್ದು , ಈ ಸುವರ್ಣಾವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವ ನಿಟ್ಟಿನಲ್ಲಿ ಪಕ್ಷಕ್ಕಾಗಿ ದುಡಿದ ಯುವಕರಿಗೆ ಸಮರ್ಥ ಸ್ಥಾನಮಾನವನ್ನು ಕೊಟ್ಟು ಗೌರವಿಸಬೇಕಾಗಿದೆ. ಹೀಗಾಗಿ ಕಾಂಗ್ರೆಸ್ ಪಕ್ಷದ ಮೀನುಗಾರ ವಿಭಾಗದ ರಾಜ್ಯಾಧ್ಯಕ್ಷರಾದ ಮಂಜುನಾಥ ಸುಣಗಾರ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ನೇಮಕ ಮಾಡಿಕೊಳ್ಳುವ ಮೂಲಕ ಅವರ ಪಕ್ಷಸೇವೆಗೆ ಹಾಗೂ ಪಕ್ಷನಿಷ್ಟೆಗೆ ಗೌರವಿಸಬೇಕಾಗಿ ಮತ್ತು ಜನಾಂಗಕ್ಕೆ ರಾಜಕೀಯ ಅವಕಾಶವನ್ನು ಕಲ್ಪಿಸಿಕೊಡಬೇಕಾಗಿ ಯೋಗೇಶ್ ಶಿರೂರು ಅವರು ಸಮುದಾಯದ ಪರವಾಗಿ ಕಾಂಗ್ರೆಸ್ ಮುಖಂಡರನ್ನು ಒತ್ತಾಯಿಸಿದ್ದಾರೆ.

Right Click Disabled